Sunday 2 August 2009

ನಾವೆಷ್ಟು ಶ್ರೀಮಂತರೆಂದು ನಮಗೆ ಗೊತ್ತಾ ?

" ಶ್ರೀ ಶಾರದ ದೇವಿ ಅಂಧರ ವಿಕಾಸ ಕೇಂದ್ರ, ಶಿವಮೊಗ್ಗ "
ಮೊನ್ನೆ ಊರಿಗೆ ಹೋದಾಗ ನಾನು ಇಲ್ಲಿಗೆ ನನ್ನ ತಮ್ಮನೊಂದಿಗೆ ಬೇಟಿ ನೀಡಿದ್ದೆ. ಹೌದಲ್ಲವೇ ನಮ್ಮ ಬಳಿ ಎಲ್ಲವು ಇರುತ್ತದೆ, ಆದರೆ ಯಾವುದೋ ಇಲ್ಲದ ಒಂದು ಚಿಕ್ಕ ವಸ್ತುವಿಗಾಗಿ ಬಾರಿ ಬಾರಿ ನೆನಪಿಸುತ್ತಾ ಛೆ ಅದು ನಮ್ಮ ಬಳಿ ಇಲ್ಲವಲ್ಲ, ಎಂದು ಹೇಳುತ್ತಾ ಇರುವ ಎಲ್ಲ ವಸ್ತುಗಳನ್ನು ಸರಿಯಾಗಿ ಅನುಭವಿಸದೇ ಇಲ್ಲದೆ ಇರುವ ವಸ್ತುವನ್ನೇ ದೊಡ್ಡ ಕೊರತೆಯನ್ನಾಗಿ ಮಾಡಿ ಕೊಂಡು ಅದೇ ಚಿಂತೆಯಲ್ಲಿ ಮುಳುಗುತ್ತೇವೆ. ಉದಾ : ಮನೆಯಲ್ಲಿ ಎಲ್ಲವು ಇದೆ ಆದರೆ ಸೋಲಾರ್ ಇಲ್ಲ ಬಹಳ ಕಷ್ಟ ಆಗಿದೆ, ಮುಂದುವರೆಯುತ್ತಾ ಇನ್ನೊಬ್ಬರು ನನ್ನ ಬಳಿ ಇರುವುದು ೨೦೦೮ Nokia Cell ಛೆ ೨೦೦೯ ಇಲ್ಲವಲ್ಲ ಎಂಬ ಕೊರಗು, ಮತ್ತೊಬ್ಬರು ಎಲ್ಲ ಇದ್ದು Spotrs Car ಇಲ್ಲವಲ್ಲ ಎಂಬ ಕೊರಗು. ಮಿತಿಯೇ ಇಲ್ಲ ,,,,,,

ಅವನಿಗೆ ನನಗಿಂತ ಜಾಸ್ತಿ ಸಂಬಳ ಛೆ ' ಮತ್ತೊಬ್ಬ ಛೆ' ಅವನ ಮನೆ ನಮ್ಮದಕ್ಕಿಂತ ದೊಡ್ಡ ಮನೆ, ಹೀಗೇಕೆ ಎಲ್ಲರಂತೆ ಎಲ್ಲ ಇದ್ದು ಸಹ ಇರದೇ ಇರುವ ಯಾವುದೋ ಸಣ್ಣ ವಸ್ತು ನಮಗೆ ದೊಡ್ಡ ಕೊರತೆ ಯಾಗಿ ಕಾಣುತ್ತೇವೆ. ಕೆಲವರಂತೂ ನಮ್ಮ ಜೀವನವೇ ಬ್ಯಾಡ್ ಲಕ್ಕ್ ಎಂದು ಕೊರಗುವುದು, ಕುಡಿಯುವುದು ಅಳುವುದು ಹೊಡೆದಾಡುವುದು ಕದಿಯುವುದು ಏನೆಲ್ಲಾ ಮಾಡುತಾರೆ. ಕಾರಣ ಇಷ್ಟೇ ಕೊರತೆ ಎಂಬ ಕೊರಗು ಕಾಡುವುದರಿಂದ.

ಎಂದಾದರೂ ಒಂದು ದಿನ ಬಿಡುವು ಮಾಡಿಕೊಂಡು ನಾವು ಯಾವುದಾದರು ಒಂದು ಸರ್ಕಾರಿ ಆಸ್ಪತ್ರೆಗೆ ಬೇಟಿ ಕೊಟ್ಟರೆ ಆಗ ತಿಳಿಯಬಹುದು ನಾವೆಷ್ಟು ಶ್ರೀಮಂತರೆಂದು. ಕಾರಣ ಅಲ್ಲಿ ಇರುವ ರೋಗಿಗಳನ್ನು ಒಮ್ಮೆ ನೋಡಿ ಎಂತೆಂತ ರೋಗಗಳನ್ನು ಹೊತ್ತು ಬಂದವರನ್ನು ಕಾಣಬಹುದು. ನೀವೊಮ್ಮೆ ಚಿಂತಿಸಿ ನೋಡಿ ನಾವೆಷ್ಟು ಆರೋಗ್ಯವಂತರೆಂದು - ಕೆಲಸ ಮಾಡುತ್ತವೆ ಸಿನೆಮ ನೋಡುತ್ತೇವೆ ಪಿಕ್ನಿಕ್ ಹೋಗುತ್ತೇವೆ ಫೋಟೋ ತೆಗೆಯುತ್ತೇವೆ ಅದನ್ನು ನೋಡಿ ಆನಂದಿಸುತ್ತೇವೆ. ಸಮಾರಂಭಗಳಲ್ಲಿ ವಿಜ್ರಂಭಿಸುತ್ತೇವೆ, ಕಂಪ್ಯೂಟರ್ ಉಪಯೋಗಿಸುತ್ತೇವೆ ಹಾಡು ಕೇಳುತ್ತೇವೆ ಫೋಟೋ ನೋಡುತ್ತೇವೆ ..

ಎಲ್ಲವನ್ನು ಅನುಭವಿಸುತ್ತೇವೆ ಆರೋಗ್ಯವಿದೆ ಸಂತೋಷವಿದೆ ಸೌಭಾಗ್ಯವಿದೆ ಕನಸನ್ನು ಕಾಣುತ್ತೇವೆ ಅದನ್ನು ಅನುಭವಿಸುತ್ತೇವೆ ಅದರ ಬಗ್ಗೆ ಮಾತನಾಡುತ್ತೇವೆ. ಮತ್ತೇಕೆ ಇಲ್ಲದ ಚಿಕ್ಕ ವಸ್ತುವಿಗಾಗಿ ಕೊರಗುವುದು. ನಮ್ಮಲ್ಲಿ ಇರುವುದೆಲ್ಲವೂ ಶ್ರೀಮಂತಿಕೆಯೇ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಅಲ್ಲವೇ ಹೌದು ಇವೆಲ್ಲವೂ ನಮ್ಮ ಶ್ರೀಮಂತಿಕೆಯೇ ,,,,,,,,,, ಕಾರಣ

ಚಿಂತಿಸಿ ಒಂದು ಕ್ಷಣ ನಮಗೆ " ಆರೋಗ್ಯ ಸರಿಯಿಲ್ಲದೆ " ಅಥವಾ ನಮಗೆ " ಎರಡು ಕಣ್ಣುಗಳು ಇಲ್ಲದೆ ಇದ್ದಲ್ಲಿ " ನಮ್ಮ ಸ್ತಿತಿ ಎನಾಗಬುದಿತ್ತು . ಆದ್ದರಿಂದ ಸ್ನೇಹಿತರೇ ಇರುವುದನ್ನು ಸಂತೋಷದಿಂದ ಅನುಭವಿಸಿ , ಆ ಸೃಷ್ಟಿಕರ್ತನನ್ನು ಸ್ಮರಿಸಿ
ಗೌರವಿಸಿ ಈಗ ನೀವಿರುವ ಸ್ತಳದಲ್ಲೇ ಯೋಚಿಸಿ ನಾವೆಷ್ಟು ಶ್ರೀಮಂತರೆಂದು .

ಇದೆಲ್ಲ ಹೇಳಲು ಕಾರವಿಷ್ಟೇ " ಶ್ರೀ ಶಾರದದೇವಿ ಅಂಧರ ವಿಕಾಸ ಕೇಂದ್ರ " ಇದು ಶಿವಮೊಗ್ಗದ ಮುಖ್ಯ ಬಸ್ಸು ನಿಲ್ದಾಣದಿಂದ ಕೆಲವೇ ಕೀ, ಮೀ, ದೂರದಲ್ಲಿದೆ . ಸ್ತಳ " ಅನುಪಿನಕಟ್ಟೆ " ಗೋಪಾಳ " ಶಿವಮೊಗ್ಗ .
ಒಮ್ಮೆ ಇಲ್ಲಿ ಬೆಟಿಕೊಡಿ. ಇಲ್ಲಿ ಇರುವ ಎಲ್ಲ ಮಕ್ಕಳು ಅಂಧರು, ಇಲ್ಲಿ ಅವರಿಗೆ ವಿಧ್ಯಬ್ಯಾಸ , ತೋಟಗಾರಿಕೆ , ಹಾಡುಗಾರಿಕೆ, ತಬಲಾ ತರಬೇತಿ ಇದೆಲ್ಲವನ್ನೂ ನೀಡಲಾಗುತ್ತಿದೆ.
ನಿಮ್ಮ ಪ್ರೀತಿ ಅವರಿಗೆ ಒಂದು ಕೊಡುಗೆಯಾಗಲಿ ,,,,,,,,,

" ನಿಮಗಿದು ಗೊತ್ತೇ ಅಂಧರಿಗೆ ಕನಸುಗಳು ಬೀಳುವುದಿಲ್ಲ "

ಕರುಣೆ ಬೇಡ ಪ್ರೀತಿಯನ್ನು ಕೊಡಿ - ನಾವೆಷ್ಟು ಶ್ರೀಮಂತರೆಮ್ಬುದು ತಿಳಿದುಕೊಳ್ಳಿ
ಸೃಷ್ಟಿಕರ್ತನು ನಮ್ಮನ್ನು ನಿಮ್ಮನ್ನು ಆ ಮಕ್ಕಳನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತಾ , ನಿಮ್ಮ ಆತ್ಮೀಯ ಇಸ್ಮಾಯಿಲ್ ಶಿವಮೊಗ್ಗ
(ದಯವಿಟ್ಟು ಕ್ಷಮಿಸಿ )

No comments:

Post a Comment