Monday 19 October 2009

ಮಂಡಗದ್ದೆ ಪಕ್ಷಿ ಧಾಮ ಪಕ್ಷಿಗಳ (ಕಣ್ಣೀರ) ಕಲರವ

ಮಂಡಗದ್ದೆ ಪಕ್ಷಿ ಧಾಮ ವೆಂದರೆ ಎಲ್ಲರಿಗು ತಿಳಿದಿರುವ ವಿಷಯ. ಶಿವಮೊಗ್ಗದಿಂದ ಕೆಲವೇ ನಿಮಿಷಗಳ ಪ್ರಯಾಣದಲ್ಲಿ ಅಲ್ಲಿ ತಲುಪಬಹುದು, ಹೊಸಹಳ್ಳಿ ಗಾಜನೂರು ಮಂಡಗದ್ದೆ. ತುಂಗಾ ನದಿಯ ತೀರದಲ್ಲೇ ಚಲಿಸುವ ರಸ್ತೆ ಮಂಡಗದ್ದೆ ಪಕ್ಷಿಧಾಮಕೆ ತಲುಪುತ್ತದೆ ರಸ್ತೆಯ ಪಕ್ಕದಲ್ಲೇ ತುಂಗಾ ನದಿ ಅದರ ಒಂದು ಭಾಗದಲ್ಲಿ ಪಕ್ಷಿಗಳ ಕಲರವ ಅಲ್ಲೊಂದು ಪಕ್ಷಿ ವೀಕ್ಷಣ ಗೋಪುರ, ಈ ಗೋಪುರಕ್ಕೆ ಹತ್ತುವಾಗ ಬಹಳ ಜಾಗರೂಕತೆಯಿಂದ ಹತ್ತ ಬೇಕು.

ಈ ದಾರಿಯ ಮೂಲಕ ಮಂಗಳೂರು ಹೋಗುವಾಗಲೆಲ್ಲ ನಾನು ಬಹಳ ನೆನಪಿಸಿಕೊಳ್ಳುವ ಪಕ್ಷಿಧಾಮಕ್ಕೆ ಒಂದು ವಿಷೆಶತೆಯು ಇದೆ ಅದೆಂದರೆ ಮಂಜಣ್ಣನ ಮಗಳು ಲಕ್ಷ್ಮಿ . ಕಾರಣವಿಷ್ಟೇ ಅಂದು ನಾನು ಕಾಲೇಜಿನಲ್ಲಿದ್ದಾಗ ನಾವು ಸ್ನೇಹಿತರೆಲ್ಲ ಸೇರಿ ಬೈಕಿನಲ್ಲಿ ಪಕ್ಷಿ ಧಾಮ ನೋಡಲು ಹೋಗಿದ್ದೆವು. ಹೀಗೆ ಹೋದವರು ಗೋಪುರ ಹತ್ತಿ ಪಕ್ಷಿಗಳನ್ನು ನೋಡುತ್ತಾ ಒಬ್ಬಬ್ಬರದು ಒಂದೊಂದು ಅಭಿಪ್ರಾಯಗಳನ್ನು ತೋರ್ಪಡಿಸುತ್ತ ಇದ್ದಾಗ ಕೆಳಗೆ ಬಟ್ಟೆ ತೊಳೆಯಲು ಬಂದಿರುವ ಹುಡುಗಿಯರಲ್ಲಿ ಲಕ್ಷ್ಮಿಯು ಇದ್ದಳು ಆದರೆ ಅವಳು ನನ್ನನ್ನು ನೋಡಿರಲಿಲ್ಲ ಅಲ್ಲದೆ ನನ್ನ ಸ್ನೇಹಿತರಾರಿಗೂ ಪರಿಚಯವಿಲ್ಲ ಆದರೆ ಇವರ ಕುಟುಂಬ ಪೂರ್ತಿ ನಮ್ಮ ಮನೆಯವರಿಗೆ ಗೊತ್ತು ಇವಳಿಗೂ ಗೊತ್ತು. ಹೀಗಿರುವಾಗ ನಾನು ಸುಮ್ಮನೆ ಇದ್ದೆ ಕಾರಣ ಅಲ್ಲಿ ಏನಾದರು ತಲೆ ಹರಟೆ ನಡೆದರೆ ಅದು ನೇರ ನಮ್ಮ ಮನೆ ತಲುಪುತ್ತದೆ ಎಂಬುದು ಖಾತ್ರಿ, ನಾವು ತಂದಿದ್ದ ತಿಂಡಿ ಪೊಟ್ಟಣಗಳನ್ನು ಬಿಚ್ಚು ತಿದ್ದಂತೆಯೇ ಎಲ್ಲಿಂದಲೋ ಹಲವಾರು ಮಂಗಗಳು ಬಂದು ಸೇರತೊಡಗಿದವು ಅದನ್ನು ನೋಡಿ ನಾವೆಲ್ಲರೂ ಹೆದರಿ ಆಚೆ ಈಚೆ ಅದನ್ನು ಓಡಿಸ ತೊಡಗಿದೆವು.
ಇದನ್ನು ನೋಡಿ ಲಕ್ಷ್ಮಿ ತುಳುಬಾಷೆಯಲ್ಲಿ ಇಲ್ಲಿ ನೋಡೇ ಮಂಗಗಳನ್ನು ನೋಡಿ ಮಂಗಗಳು ಮಾಡ್ತಾ ಇರೋದು ಅಂದು ಬಿಟ್ಟಳು ಅಲ್ಲಿ ನಮ್ಮ ಸ್ನೇಹಿತರಾರಿಗೂ ತುಳು ಬರುವುದಿಲ್ಲ ಆದರೆ ನಂಗೆ ತುಳು ಗೊತ್ತು ಕೂಡಲೇ ನಾನು ಗೋಪುರದಿಂದ ಬಗ್ಗಿ ತುಳುವಿನಲ್ಲಿ ಏ ಲಕ್ಷ್ಮಿ ಛೆ ನೀನು ನಮಗೆ ಈ ರೀತಿ ಹೇಳಬಾರದಿತ್ತು ಅಂದು ಬಿಟ್ಟೆ ಅನಿರೀಕ್ಷಿತವಾಗಿ ನನ್ನನ್ನು ನೋಡಿದ ಲಕ್ಷ್ಮಿ ತೊಳೆಯುವ ಬಟ್ಟೆಯನ್ನು ಬಿಟ್ಟು ಮನೆಗೆ ಓಡಿದಳು .
ಮತ್ತೆ ಅವಳನ್ನು ನೋಡುವುದೇ ಅಪರೂಪ ವಾಯ್ತು ಕಾರಣ ವಿಷ್ಟೇ ಎಲ್ಲಿ ಸುದ್ದಿ ಅವರಪ್ಪನಿಗೆ ತಲುಪುತ್ತದೋ ಅಂತ ಅವಳಿಗೆ ಹೆದರಿಕೆ. ಇವೆಲ್ಲ ಒಂದು ಹುಡುಗಾಟಿಕೆ ತರ ಮುಗಿದು ಹೋಯ್ತು.
ಅಗಾಗ ಮಂಡಗದ್ದೆಗೆ ಹೋಗುವುದು ನೆಂಟರು ಬೇರೆ ಬೇರೆ ಊರಿಂದ ಬಂದಾಗ ಅವರನ್ನು ಕರೆದು ಕೊಂಡು ಹೋಗುವುದು ಹೀಗೆ ನಡೆದಿತ್ತು. ಅದೊಂದು ಅದ್ಬುತ ಲೋಕವಾಗಿತ್ತು ದೂರ ದೂರ ದೇಶದಿಂದ ಪಕ್ಷಿಗಳು ಅಲ್ಲಿಗೆ ಬರುತ್ತಿದ್ದವು ಹರಿಯುವ ನೀರು ಅದ್ರ ಮದ್ಯೆ ಮರಗಳು ಅಲ್ಲಿ ಪಕ್ಷಿಗಳ ಗೂಡು ಅದರ ಕಲರವ ,,,

ಅದೆಲ್ಲ ಈಗ ಒಂದು ನೆನಪು ಮಾತ್ರ ಕಾರಣ ಈಗ ಅಲ್ಲಿ ಹಿಂದಿನಂತೆ ಪಕ್ಷಿ ಗಳು ಇಲ್ಲ ಮೊನ್ನೆ ನಾನು ಅಲ್ಲಿ ಹೋದಾಗ ಕಂಡದ್ದು ಪಕ್ಷಿಗಳ ಕಣ್ಣೀರು . ಪ್ರಕೃತಿಯ ವಿಕೋಪದಿಂದ ಉಕ್ಕಿ ಹರಿದ ನೀರು ಪಕ್ಷಿಗಳ ಗೂಡುಗಳನ್ನೆಲ್ಲ ಕೊಚ್ಚಿಕೊಂಡು ಹೋಗಿದೆ, ಅಲ್ಲಿದ್ದ ಮರಗಳು ಹಿನ್ನೀರಿನ ಹೆಚ್ಚಳದಿಂದಾಗಿ ಮುಳುಗಿ ಹೋಗಿವೆ , ಅದಕ್ಕಿಂತ ಹೆಚ್ಚಾಗಿ ಮನುಷ್ಯ ಎಂಬ ರಾಕ್ಷಸ ಪಕ್ಷಿಗಳ ಬೇಟೆಯನ್ನು ಪ್ರಾರಂಬಿಸಿದ್ದಾನೆ ಅದರಿಂದಲೂ ಹೆದರಿ ಅವು ದೂರಾಗಿವೆ. ಸುಂದರ ಪಕ್ಷಿಧಾಮ ನೆನಪುಗಳ ಸರಣಿಯಲ್ಲಿ ಮರೆಯಾಗಿದೆ ನಾನು ಅದೇ ಸ್ಥಳದಲ್ಲಿ ಹಿಂದೆ ತೆಗೆದ ಫೋಟೋಗಳು ಇಂದಿನ ಫೋಟೋಗಳಿಗೆ ಹೊಲಿಕೆಯಾಗುತ್ತಿಲ್ಲ. ತೊಂದರಯಿಲ್ಲ ಇಂದಲ್ಲ ನಾಳೆ ನನ್ನ ಮಂಡಗದ್ದೆ ಪಕ್ಷಿ ಧಾಮ ಮತ್ತೆ ಸುಂದರತೆಯನ್ನು ಪಡೆದು ಕೊಳ್ಳುತ್ತದೆ ಅದರ ನಿರೀಕ್ಷೆಯಲ್ಲಿ ಕಾಯುತ್ತ ಇದ್ದೇನೆ ,,,,,,
ಹೆಚ್ಚಿನ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ :-
http://picasaweb.google.com/IsmailMkShivamogga/MandagaddeShivamoga#

"ನಗರ ಕೋಟೆ" ಜೀವನದಲ್ಲಿ ಒಮ್ಮೆಯಾದರು ನೋಡಿರಿ


ಅಂದು ನಾನು ಡಿಗ್ರಿಯಲ್ಲಿದ್ದಾಗ ಬೇಕಲ ಕೋಟೆ ನೋಡಲು ಹೋಗಿದ್ದೆ, ಆಗ ಅಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ ಅದೊಂದು ನಿರ್ಜನ ಪ್ರದೇಶವಾಗಿತ್ತು ಗಿಡ ಗಂತಿಗಳೆಲ್ಲ ಬೆಳೆದು ಅದೊಂದು ಬೇರೆಯೇ ವಾತವರಣ ಇತ್ತು. ಕಳೆದ ಡಿಸೆಂಬರಿನಲ್ಲಿ ಅಲ್ಲಿ ಹೋದಾಗ ಅದೊಂದು ಹೊಸ ಬೇಕಲ ಕೋಟೆ ಅದರ ಸುಂದರತೆಗೆ ಬದಲಿಲ್ಲ ಹಾಗೆ ಬದಲಾಗಿದೆ. ಈಗಲ್ಲಿ ಪ್ರವೇಶ ಶುಲ್ಕ ಕೊಡಬೇಕು ಸ್ಟಿಲ್ ಕ್ಯಾಮರಕ್ಕೆ ಶುಲ್ಕ, ವೀಡಿಯೋ ಕ್ಯಾಮ್ ಗೆ ಬೇರೆ ಶುಲ್ಕ, ಶೌಚಾಲಯ ವೆವಸ್ತೆ ಮಾಡಿದ್ದಾರೆ ಎಲ್ಲವು ಅಚ್ಚುಕಟ್ಟಾಗಿದೆ. ದಿನವು ಸಾವಿರಾರು ಜನರು ನೋಡಲು ಬರುತ್ತಾರೆ ಬಳಷ್ಟು ಸಿನಿಮಾ ಶೂಟಿಂಗಳು ಅಲ್ಲಿ ನಡೆಯುತ್ತವೆ. ಅಂದರೆ ಪ್ರವಾಸೋದ್ಯಮ ಎಚ್ಚತ್ತು ಕೊಂಡಿದೆ ಅದರ ವರಮಾನವು ಪಕ್ಕದ ಕೇರಳ ರಾಜ್ಯಕ್ಕೆ ಬಹಳಷ್ಟು ಬರುತ್ತಿದೆ.

ಇದೆಲ್ಲ ಹೇಳಲು ಕಾರಣ ನಾನು ಈ ಕಾಂಕ್ರೀಟ್ ಕಾಡಿನಲ್ಲಿದ್ದರು ಗೂಗಲ್ ನಲ್ಲಿ ಅಗಾಗ ನಮ್ಮ ಭಾರತವನ್ನು ಅದರಲ್ಲೂ ನಮ್ಮ ಕರ್ನಾಟಕವನ್ನು ಆದಷ್ಟು ಕೂಲಂಕಷ ವಾಗಿ ನೋಡಲು ಪ್ರಯತ್ನಿಸುತ್ತಿರುತ್ತೇನೆ. ಅದರಲ್ಲಿ ನನಗೆ ಅತಿಯಾಗಿ ಅಗಾಗ ಕಾಡುವ ಕೆಲವು ಸ್ಥಳಗಳೆಂದರೆ " ನಗರ ಕೋಟೆ " ಕವಲೇ ದುರ್ಗಾ " ಹಂಪಿ " ಜೋಗ " ಬಾಬಬುಡನಗಿರಿ " ಆಗುಂಬೆ " ಹುಲಿಕಲ್ಲು " ಶಿರಾಡಿ ಘಾಟ್ " ಕೊಡಚಾದ್ರಿ " ಯಾಣ " ಚಿತ್ರ ದುರ್ಗ " ಮಡಿಕೇರಿ " ಕುದುರೆಮುಖ " ಇನ್ನು ಹಲವಾರು ನಾನು ಇಷ್ಟ ಪಡುವಂತ
ಅದರಲ್ಲಿ ಈ ಬಾರಿ ನೋಡಲೇಬೇಕು ಎಂದು ತೀರ್ಮಾನಿಸಿದ್ದ ಕೆಲವು ಸ್ಥಳಗಳನ್ನು ನೋಡಿ ಸಂತೋಷವು ಬೇಸರವು ಆಯ್ತು ಕಾರಣ ಹಲವಾರು. ನಗರ ಕೋಟೆ ನೋಡಲು ತೀರ್ಮಾನಿಸಿ ಹೊರಟ ನಾವು ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗವಾಗಿ ಹೊರಟು ಅರಗ' ಅರಳಿ ಸುರಳಿ ' ಹಿಲ್ಕುಂಜಿ 'ಕವಲೇದುರ್ಗ' ನಗರ ' ಹೊಸನಗರ ಸೂಫಿ ಶ್ರೈನ್ ಎಲ್ಲ ನೋಡುತ್ತಾ ನಗರ ಕೋಟೆ ತಲುಪಿದೆ ಜೊತೆಯಲ್ಲಿ ಮನೆಯವರೆಲ್ಲರೂ ಇದ್ದರು. ಬೆಳಗಿನಿಂದಲೇ ಚಿಟಿ ಪಿಟಿ ಮಳೆಯಲ್ಲಿ ತಂಪು ಗಾಳಿಯಲ್ಲಿ ಒಮ್ಮೆ ನದಿ ಕಂಡರೆ ಮತ್ತೊಮ್ಮೆ ಕಾಡು ಮತ್ತೊಮ್ಮೆ ಕಾನನ ಮತ್ತೊಮ್ಮೆ ಪ್ರಾಣಿಗಳು ಮತ್ತೊಮ್ಮೆ ಪಕ್ಷಿಗಳ ಕಲರವ ಇವೆಲ್ಲವುಗಳ ಮದ್ಯೆ ನಮ್ಮ ವಾಹನ ನಿಧಾನವಾಗಿ ಸಾಗುತಿತ್ತು. ಮಳೆಯಲ್ಲಿ ನೆಂದು ಬರುವ ಮಣ್ಣಿನ ಸುವಾಸನೆ ಚಿರ್ ಚಿರ್ ಎಂದು ವಾಹನದ ಟೈರಿಗೆ ಹಾರಿದ ನೀರಿನ ಶಬ್ದ , ಕೆಲೊಮ್ಮೆ ಕಾಡಿನ ಮದ್ಯೆ ಹೋಗುವಾಗ ಮರಗಳ ಮೇಲಿನಿಂದ ಬೀಳುವ ದಪ್ಪ ದಪ್ಪ ಮಳೆನೀರಿನ ಹನಿಗಳ ಶಬ್ದ, ಕೆಲೊಮ್ಮೆ ದಾರಿಯಲ್ಲಿ ಸೌದೆಯನ್ನು ಹೊತ್ತು ತಲೆಯ ಮೇಲಿಟ್ಟು ತಮ್ಮದೇ ಆದ ಭಂಗಿಯಲ್ಲಿ ಮಳೆಯನ್ನು ಗಾಳಿಯನ್ನು ಲೆಕ್ಕಿಸದೆ ನಡೆದು ಹೋಗುತ್ತಿರುವ ಹೆಂಗಸರು ಹುಡ್ಗಿಯರ ಸಾಲು, ಗೋಪ್ಪೆ ಹೊದ್ದು ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಜನರು ಛತ್ರಿd ಜನರು ಬಸ್ಸಿಗಾಗಿ ಕಾಯುತ್ತಿರುವ janaru ದೂರ ದೂರದಲ್ಲಿ ಮನೆಗಳು ಹೀಗೆ ನೋಡುತ್ತಾ ನೋಡುತ್ತಾ ದಾರಿ ಸವೆದದ್ದು ತಿಳಿಯಲಿಲ್ಲ ಅದೋ ಬಂತು ನಗರ ಕೋಟೆ.

ವಾಹನದಿಂದ ಇಳಿದು ಕೋಟೆಯ ಮಹಾ ದ್ವಾರದಿಂದ ಒಳಬಂದೆವು ಅಲ್ಲಿಗೆ ತಲುಪುವಾಗಲೇ ಸುತ್ತಲು ನೀರು ಇರುವುದನ್ನು ಸೂಫಿ ಶ್ರೈನ್ ನಿಂದ ನೋಡಿ ತಿಳಿಯಬಹುದಾಗಿತ್ತು. ಮನುಷ್ಯ ತನ್ನ ಜೀವನದಲ್ಲಿ ಒಮ್ಮೆಯಾದರು ಅದನ್ನು ನೋಡಲೇಬೇಕು. ಮಂಜು ಮುಸುಕಿದ ವಾತವರಣ ಜಿನಿ ಜಿನಿ ಮಳೆ ಸುತ್ತಲು ನೀರು ಅಲ್ಲೊಂದು ಇಲ್ಲೊಂದು ಸೇತುವೆ, ದೂರ ದೂರದಲ್ಲಿ ಅಲ್ಲೊಂದು ಇಲ್ಲೊಂದು ಮನೆ, ಹಸಿರಿನ ರಾಶಿ ಹೌದು ನನ್ನೂರಿಂದ ಕೆಲವೇ ಗಂಟೆಗಳ ಅವಧಿಯಲ್ಲಿ ತಲುಪುವ ಈ ಸೌನ್ದರ್ಯ ರಾಶಿಯನ್ನು ನಾನು ನೋಡಿರಲಿಲ್ಲ ಅಂದ ಮಾತ್ರಕ್ಕೆ ಇದನ್ನು ನಾನು ಬೇರೆ ಕೊಟೆಗಳೊಂದಿಗೆ ಹೋಲಿಸುತ್ತಿಲ್ಲ ಆದರು ಹಸಿರಿನ ಮದ್ಯೆ ಇಂದೊಂದು ಹಸಿರು ರಾಶಿಯಾಗಿ ಕಂಡಿತು ಇದನ್ನು ನೋಡಲು ಸೂಕ್ತ ಸಮಯ ವೆಂದರೆ ಆಗಸ್ಟ್ ಸೆಪ್ಟೆಂಬರ್ ಒಕ್ಟೋಬರ್ ನವಂಬರ್ ಡಿಸೆಂಬರ್ ಇವು ಒಳ್ಳೆಯ ಸಮಯ ಕಾರಣ ಮಳೆಯಲ್ಲಿ ಎಲ್ಲವು ಹಸಿರಾಗಿ ನದಿಗಳು ತುಂಬಿ ಸುತ್ತಲ ನೀರಿನ ಮದ್ಯೆ ಈ ಕೋಟೆ ಕಾಣುತ್ತದೆ.
ಇಷ್ಟೆಲ್ಲಾ ಆದರು ಬೇಸರದ ವಿಷಯವೆಂದರೆ ಅಲ್ಲಿ ಯಾವುದೇ ವೆವಸ್ತೆ ಇಲ್ಲ ಅಂದರೆ ದೂರದಿಂದ ಬರುವ ಪ್ರಾವಾಸಿಗರಿಗಾಗಿ ಬೇಕಾಗಿರುವುದು ಒಂದು ಶೌಚಾಲಯ ಮತ್ತು ಕುಡಿಯುವ ನೀರಿನ ವೆವಸ್ತೆ ಅಷ್ಟೆ ಮುಖ್ಯ ವಾಗಿ ಅದೇ ಇಲ್ಲ. ಅದಾದ ನಂತರ ಒಳ ಹೋದರೆ ಅಲ್ಲಿ ಕಾಣುವುದು ದನ ಎಮ್ಮೆ ಗಳು ಮೆಯುತ್ತಿರುವುದು ಎಲ್ಲವು ಅಲ್ಲೋಲ ಕಲ್ಲೋಲ ನೀರಿಲ್ಲದ ಹೊಂಡಗಳು ಹಾಳಾಗಿ ಬೀಳಾಗಿ ಹೋದ ವೆವಸ್ತೆ ಪಾಚಿಗಟ್ಟಿರುವ ದರ್ಬಾರ್ ಸ್ತಳ ಇವೆಲ್ಲವನ್ನೂ ಸರಿ ಮಾಡಿ ದುರಸ್ತಿ ಗೊಳಿಸಿ ಚಿಕ್ಕ ಒಂದು ಪ್ರವೇಶ ಶುಲ್ಕವನ್ನು ಇತ್ತು ಅದರಿಂದಲೇ ಬರುವ ವರಮಾನವನ್ನು ಎಲ್ಲ ಅಬಿರುದ್ದಿ ಕಾರ್ಯಗಳಿಗೆ ಬಳಸಬಹುದಲ್ಲ , ಅದೇ ರೀತಿ ಮುಂದುವರೆದು ಬೇಕಲ ಹೋಗುವ ನಮ್ಮ ಕನ್ನಡ ಸಿನಿಮಾ ತಯಾರಕರು ತಮ್ಮ ಸಿನಿಮಾಗಳನ್ನು ಇಲ್ಲಿಯೇ ಚಿತ್ರಿಸಬಹುದಲ್ಲ , ಹೀಗೆ ಅಲ್ಲವೇ ಅಭಿರುದ್ದಿ ಪ್ರಾರಂಭ ಗೊಳ್ಳುವುದು .
ನಾನು ಅಂದು ನೋಡಿದ ಬೇಕಲ ಕೋಟೆ ಹೀಗೆಯೇ ಇತ್ತು ಆದರೆ ಇಂದು ಎಲ್ಲ ಸಿನೆಮದವ್ರಿಗೂ ಗೊತ್ತು ಬೇಕಲ. ಹ್ಹಾಗೆಯೇ ಮುಂದೊಂದು ದಿನ " ನಗರ ಕೋಟೆಯೂ ಎಲ್ಲರಿಗು ತಿಳಿಯುವಂತಾಗಲಿ" ಎಲ್ಲರು ನೋಡಿ ಸಂತೋಷ ಪಡುವಂತಾಗಲಿ ಎಂದು ನಿರೀಕ್ಷೆಯಲಿ ,,,,,,,,,, ನಿಮ್ಮ ಸ್ನೇಹಿತ
ಹೆಚ್ಚಿನ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ :-

Thursday 8 October 2009

ಕವಿ ಕುವೆಂಪುರವರ ಕುಪ್ಪಳ್ಳಿಯ ಮನೆಯಲ್ಲಿ ನಾನು ನನ್ನವರೊಂದಿಗೆ



ನಲ್ಲಿಯನ್ನು ತಿರುವುತ್ತಿದ್ದಂತೆ ಎರಡು ಕಾಲುಗಳಮೇಲೆ ನೀರು ಸುರಿಯತೊಡಗಿತು ನನ್ನ ಎರಡು ಕೈಗಳನ್ನು ತೊಳೆಯುತ್ತ ಬೊಗಸೆತುಂಬ ನೀರನ್ನು ಎತ್ತಿ ಮುಖದ ಮೇಲೆ ಸಿಂಪಡಿಸಿದೆ. ಇಡಿ ಮೈ ರೋಮಾಂಚನ ಗೊಂಡು ಸಂತೋಷ ಹೇಳತೀರದಾಯ್ತು, ಆ ನೀರು ಹಾಗಿದೆ ಮಲೆನಾಡ ಮದ್ಯದಲಿ ಕಾಡು ಮತ್ತು ಗುಡ್ಡಗಳ ಮದ್ಯೆ ಸುಂದರವಾದ ಮನೆ ಅದರಲ್ಲಿ ನೆನಪುಗಳ ಆಗರ ಸಂಸ್ಕೃತಿಯ ಒಡಲು ತಂಗಾಳಿಯ ತಂಪು ಪ್ರೀತಿಯ ಆರ್ದತೆ ಕಾಂಕ್ರೀಟ್ ಕಾಡಿನಿಂದ ನಾನು ನನ್ನೂರು ಮಲೆನಾಡಿಗೆ ೭ ದಿನಗಳ ರಜೆಯಲ್ಲಿ ಬಂದಿದ್ದೇನೆ ಅದೊಂದು ಸಂತೋಷವೆಬೇರೆ ಅದು ಅನುಭವಿಸಿಯೇ ತೀರಬೇಕು, ಮತ್ತೆ ಮತ್ತೆ ನೀರನ್ನು ಮುಖದ ಮೇಲೆ ಹಾಕುತ್ತ ಪ್ರತಿಸಾರಿಯೂ ಪುಳಕಿತ ಗೊಳ್ಳುತ್ತಾ ಮೈ ಮನ ಎಲ್ಲ ಸಂತೋಷವನ್ನು ಒಮ್ಮಲೆ ಅನುಭವಿಸ ತೊಡಗಿದೆ,
ಆಗ ಹಿಂದಿನಿಂದ ಒಂದು ಶಬ್ದ ಬಂತು ಅದು ಅಕ್ಕನ ಮಗಳು ಐಶ್,
ಹೇಗಿದೆ ನೀರು ನಿಮ್ಮ ದುಬೈಯಲ್ಲಿ ಈ ನೀರು ಸಿಗುತ್ತಾ ? ಸಿಕ್ಕರೂ ಆ ನೀರಿಗೆ ಈ ಆತ್ಮೀಯತೆ ಇದೆಯಾ ಇದ್ದರು ಅದಕ್ಕೆ ಈ ರೋಮಾಂಚನದ ಶಕ್ತಿ ಇದೆಯಾ, ಕಾರಣ ನಾನು ಮೊದಲು ಬಂದು ಇಲ್ಲಿ ಕುಳಿತದ್ದು ಅಣ್ಣ ನಿಮ್ಮ ಪ್ರತಿಕ್ರಿಯೆ ನೋಡಲಿಕ್ಕಾಗಿಯೇ ಎಂದು ನಗುತ್ತ ಹೇಳತೊಡಗಿದಳು ಹೌದು ನೀವು ಉತ್ತರ ಕೊಡುವುದು ಬೇಡ ನಿಮ್ಮ ಉತ್ತರವನ್ನು ನಾನು ಗ್ರಹಿಸಿಯಾಯ್ತು ಹೌದು ಇದು ನಮ್ಮ ನಾಡು ನಮ್ಮ ಮಲೆನಾಡು ನಾವು ಮಲೆನಾಡಿನ ತವರೂರಿನವರು ಎಂದು ಹೇಳುತ್ತಾ ರಮ್ಮಿಯನ್ನು ಕರೆದು ಅಣ್ಣನ ಸಂತೋಷ ನೋಡು.
ಹೌದು ನಾನು ನನ್ನವರೊಂದಿಗೆ ಕುಪ್ಪಳ್ಳಿಯಲ್ಲಿ ಕುವೆಂಪುರವರ ಮನೆಯಲ್ಲಿದ್ದೆ ಅದನ್ನು ನೋಡಲಿಕ್ಕಾಗಿಯೇ ನಾವೆಲ್ಲರೂ ಬೆಳಗ್ಗೆ ಬೇಗನೆ ಎದ್ದು ಎಲ್ಲ ಸಿದ್ದತೆಯೊಂದಿಗೆ ಶಿವಮೊಗ್ಗದಿಂದ ಹೊರಟೆವು, ಇದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಅನ್ನು' ಅಂದರೆ ಅನ್ನು' ಬಹಳ ಸಲ ಇಲ್ಲಿ ಬೇಟಿ ನೀಡಿದ್ದು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಯಾವಾಗಲು ಅನ್ನು ಮೆಲುಕುಹಾಕುವುದನ್ನು ಕೇಳುತ್ತಲೇ ಇದ್ದೆ, ಹಿಂದಿನ ದಿನ ಮಳೆ ಬಂದು ಶಿವಮೊಗ್ಗದ ತುಂಬ ತಂಪು ಹವಾಮಾನ ಬೆಳಗ್ಗೆ ಹೊರಡುವಾಗ ಇಬ್ಬನಿ ಮಳೆ ಟಾಟ ಸುಮೋದಲ್ಲಿ ಎಲ್ಲರು ಹತ್ತಿ ಹೊರಟಾಗ ಅಂತ್ಯಾಕ್ಷರಿ ಹಾಡುತ್ತಾ ಇಬ್ಬನಿ ಮಳೆಯನ್ನು ಸವಿಯುತ್ತ ಹೊಸಳ್ಳಿ, ಗಾಜನೂರು , ಮಂಡಗದ್ದೆ ಮುಡುಬ ,,,,,ತೀರ್ಥಹಳ್ಳಿ ದಾರಿಯುದ್ದಕ್ಕೂ ಕಾಡು, ತೊರೆ , ಜರಿ , ನೀರ ಧಾರೆ ಪ್ರಾಣಿಗಳನ್ನು ನೋಡುತ್ತಾ ಎಲ್ಲವನ್ನು ಸವಿಯುತ್ತ ಫೋಟೋ ತೆಗೆಯುತ್ತ ಬಂಡೆಗಳ ಮದ್ಯಇಂದ ಹರಿಯುವ ನೀರನ್ನು ಆಸ್ವಾದಿಸುತ್ತಾ ದಾರಿ ಸರಿದದ್ದೇ ತಿಳಿಯಲಿಲ್ಲ ದಾರಿಯುದ್ದಕ್ಕೂ ತುಂಗೆ ನಮ್ಮನ್ನು ನೋಡುತ್ತಲೇ ಹರಿಯುತ್ತಿದ್ದಳು,
ಹೀಗೆ ಮೊದಲು ಹೋಗಿ ಇಳಿದದ್ದು ಕುವೆಂಪುರವರ ಕವಿಶೈಲದಲಿ ಅಲ್ಲಿ ಇದ್ದ ಗೈಡ್ ಅನ್ನುವಿನ ಪರಿಚಯದ ವ್ಯಕ್ತಿ. ನಮ್ಮನು ನೋಡಿದಾಕ್ಷಣ ಸಂತೋಷದಿಂದ ಬರಮಾಡಿಕೊಂಡು ಎಲ್ಲರಿಗು ಅಲ್ಲಿಯ ಬಗ್ಗೆ ಎಲ್ಲವನ್ನು ಹೇಳುತ್ತಾ ಕುವೆಂಪುರವರ ಜೀವನ ದ ಕೆಲವು ಹಂತಗಳನ್ನು ವಿವರಿಸುತ್ತ ತನ್ನ ಕಂಠಪಾಠ ನಮಗೆ ಒಪ್ಪಿಸಿದ ರೀತಿ ನಿಜಕ್ಕೂ ಸಂತೋಷ ಗೊಳಿಸಿತು. ಅಲ್ಲಿ ಕವಿಶೈಲದಲಿ ಸುತ್ತಲು ಕಾಡು ಮತ್ತು ಬೆಟ್ಟಗಳು ಅದೊಂದು ರಮಣೀಯ ಸ್ತಳ ಶಾಂತ ಪ್ರಕೃತಿ ಸಮಾಧಾನದ ನಿಶ್ಯಬ್ಧ .
ಹೀಗೆ ಮುಂದುವರೆದು ಮತ್ತೆ ಹೋದದ್ದು ಕುವೆಂಪುರವರ ಮನೆಗೆ. ಕವಿಶೈಲದಿಂದ ಕಾಲು ದಾರಿಯು ಇದೆ ಅಲ್ಲಿ ತಲುಪಿ ಎಲ್ಲರು ವಾಹನದಿಂದ ಇಳಿದು ಯಾರು ಮಾತನಾಡಲಿಲ್ಲ ಎಲ್ಲರು ನಿಟ್ಟುಸಿರು ಬಿಟ್ಟು ನೋಡುತ್ತಾ ನಿಂತದ್ದು ಆ ಮನೆ, ಅದೊಂದು ಸ್ವರ್ಗ ' ಎಲ್ಲರು ಒಬ್ಬರ ಮುಖ ಒಬ್ಬರು ನೋಡುತ್ತಾ ಒಳಗೆ ತಲುಪಿದೆವು ಅಲ್ಲಿ ಎಡಭಾಗದಲ್ಲಿ ಹೊರಗೆ ನಲ್ಲಿ ಕಂಡಿತು ಅದರ ನೀರು ನಮ್ಮನ್ನೆಲ್ಲ ಮೂಕರನ್ನಾಗಿ ಮಾಡಿತು ಅಲ್ಲಿಂದ ಮನೆಯ ಒಳಗೆ ಒಂದೊಂದೇ ಹಂತಗಳನ್ನು ಗೈಡ್ ಪರಿಚಯಿಸುತ್ತಾ ಹೊರಟರು ಅದೊಂದು ನೆನಪುಗಳ ಆಗರ ಪ್ರತಿಯೊಂದು ವಸ್ತುಗಳು ತನ್ನದೇ ಆದ ಕಥೆಯನ್ನು ಹೇಳುತ್ತವೆ.
ಒಂದರ ಮೇಲೆ ಒಂದು ಮಾಳಿಗೆ ಮರದ ವಸ್ತುಗಳು ತಂಪಾದ ವಾತವರಣ ಎಲ್ಲವನ್ನು ನೋಡುತ್ತಾ ಒಲ್ಲದ ಮನಸ್ಸಿನಿಂದ ಹೊರಬಂದೆವು ಹಸಿವಾಗತೊಡಗಿತ್ತು ಸ್ವಲ್ಪ ದೂರ ಬಂದು ದಾರಿ ಪಕ್ಕದಲ್ಲೇ ಜರಿಯಾಗಿ ಹರಿಯುತ್ತಿದ್ದ ನೀರ ಧಾರೆಯ ಬಳಿ ಎಲ್ಲರು ಕುಳಿತು ಊಟ ಪ್ರಾರಂಬಿಸಿದೆವು. ಅಲ್ಲಿ ಸ್ವಲ್ಪ ದೂರದಲ್ಲಿ ಬಟ್ಟೆ ಒಗೆಯಲು ಕುಳಿತಿದ್ದ ಮೂರು ಹೆಂಗಸರು ಊರಿನ ಬಗ್ಗೆ ನಾಡಿನ ಬಗ್ಗೆ ಕುಶಲೋಪರಿ ಮಾತನಾಡ ತೊಡಗಿದರು.
ನಾವು ತಂದಿದ್ದ ಜಾಮೂನ್ ತಿಂದು ಇನ್ನು ಇದೆಯಾ ಅಂತ ಕೇಳಿದರು ಇಲ್ಲ ಮುಗಿಯಿತು ಎಂದು ಹೇಳಿದಾಗ ಜಾಮೂನ್ ಮಾಡಿದವರು ಯಾರು ಅಂತ ಕೇಳುತ್ತಾ ಬಹಳ ರುಚಿಯಾಗಿದೆ ಎಂದರು, ಅದಕ್ಕೆ ನಾನಂದೆ ನನ್ನ ಅಕ್ಕನ ಮಗಳು ರಮ್ಮಿ ಜಾಮೂನ್ ಮಾಡಿದ್ದು ಎಂದು ಹೇಳುತ್ತಾ ನಾನು ಕೆಲವು ಫೋಟೋಗಳನ್ನು ತೆಗೆದೆ ಕಾಡಿನಲ್ಲಿ ನೀರ ತೊರೆ ಬಂಡೆಗಳು ತಂಪಾದ ಹವಾಮಾನ ಪಕ್ಷಿಗಳ ಇಂಪಾದ ಶಬ್ದ ಇಬ್ಬನಿ ಮಳೆ ದೂರ ದೂರದಲ್ಲಿ ಮನೆಗಳು ದಾರಿ ಮದ್ಯದಲ್ಲಿ ಅಪರೂಪಕ್ಕೊಮ್ಮೆ ಎದುರಾಗುವ ಬಸ್ಸುಗಳ ಕರ್ಕಶ ಹಾರ್ನ್ ಶಬ್ದ ಅಲ್ಲಲ್ಲಿ ಗೋಪ್ಪೆ ಹೊದ್ದು ಹೋಗುತ್ತಿರುವ ಮನುಷ್ಯರು ರಸ್ತೆಯ ಮೇಲು ಹರಿಯುವ ನೀರ ನೆರಿಗೆಗಳು ,,,,,,,,,, ,,,,,, ...
(ಹೆಚ್ಚಿನ ಫೋಟೋಗಳು ಇಲ್ಲಿ ನೋಡಿ http://picasaweb.google.com/IsmailMkShivamogga/KuppalliKuvempuHouse# )