Sunday 18 April 2010

ಮನಸು ಕೊಡಲಿಲ್ಲ ಕನಸು ಕೊಟ್ಟಳು

ಮನಸು ಕೊಡಲಿಲ್ಲ ಕನಸು ಕೊಟ್ಟಳು
ಮೋಹಕ ನಗೆಯೊ೦ದಿಗೆ ಒ೦ದು ಪ್ರೇಮ ಪತ್ರ ಕೊಟ್ಟಳು
ನಿನ್ನ ಸ್ನೆಹಿತನಿಗೆ ಇದು ತಲುಪಿಸಿ ಬಿಡು ಎ೦ದು ಆಜ್ನೆಕೊಟ್ಟಳು
ತೆರೆದು ನೋಡಬೇಡ ಎ೦ದು ಕಣ್ಣು ಬಿಟ್ಟಳು
ನಮ್ಮಿಬ್ಬರ ನಡುವೆ ನೀನು ಬರಬೇಡ ಎ೦ದಳು
ನಮ್ಮಿಬ್ಬರ ಸವಾರಿಗೆ ನಿನ್ನ ಬೈಕ್ ಬೇಕೆ೦ದಳು
ಸಿನೆಮ ಟಿಕೇಟು ತರಲು ನೀನೆ ಹೋಗಬೇಕೆ೦ದಳು
ಊಟದ ಬಿಲ್ಲನ್ನು ನೀನೆ ಕೊಡಬೇಕೆ೦ದಳು
ನಿನೀಗ ಮನೆಗೆ ಹೋಗು ಎ೦ದಳು
ಕಾರಣ ನಾವು ಪ್ರೇಮಲೋಕದಲ್ಲಿ ಸುತ್ತಬೇಕೆ೦ದಳು
ರಾತ್ರಿ ಸುಮಾರು ಹೊತ್ತಿಗೆ ಫೊನು ಮಾಡಿದಳು
ಡಾಕ್ಟರ್ ರನ್ನು ಕರೆದು ತಾ ಎ೦ದಳು,,,,,,,,,,,

ನೀವು ಕರೆ ಮಾಡಿದ ಚ೦ದದಾರರು ವ್ಯಾಪ್ತಿ ಪ್ರದೇಶದಿ೦ದ ಹೊರಗಿದ್ದಾರೆ,,,,,
ದಯವಿಟ್ಟು ನಿಮ್ಮ ಪ್ರಿಯಕರನಿಗೆ ಮಾತ್ರ ಡಯಲ್ ಮಾಡಿ ಕಾರಣ ನೀವು ವ್ಯಾಪ್ತಿ ಮೀರಿ ಹೊರ ಹೋಗಿದ್ದೀರಿ,,,,,,,,,,
,,,,,,,,,!

Tuesday 13 April 2010

ಸು೦ದರಿ ನಮ್ಮೂರಿನವಳು ಭಾಗ - ೧

ಎಷ್ಟೊ೦ದು ಹತ್ತಿರ ನಡಿಯುತ್ತಿದ್ದಾರೆ ಎ೦ತಹ ಸಲಿಗೆ ಛೆ’ ಇವಳೇಕೆ ಹೀಗಾದಳು ಶ್ರೀಮ೦ತಿಕೆ ಅ೦ದರೆ ಇದೆ ಏನು. ಅವನು ಯವುದೊ ದೇಶದ ಕಪ್ಪು ಕಪ್ಪು ನೀಗ್ರೊ ಇವಳಾದರೊ ಎಷ್ಟೊ೦ದು ಸು೦ದರಿ ನಮ್ಮೂರಿನವಳು ಇಲ್ಲಿ ಅಮೆರಿಕಾದಲ್ಲಿ ಇವನೊಟ್ಟಿಗೆ ಜೀವನವನ್ನು ಹೇಗೆ ನಿಭಾಯಿಸುತ್ತಿದ್ದಾಳೆ.




ನೀನೆ ನನ್ನ ಸರ್ವಸ್ವ ನೀನೆ ಪ್ರಾಣ ಎನ್ನುತ್ತಿದ್ದವಳು, ಯಾವುದೊ ನೀಗ್ರೊ ವ್ಯಕ್ತಿ ಜೊತೆಗೆ ಒಹ್ ’ ಈಗ ಇವಳ ಠಾಕು ಟೀಕು ನೋಡಿ ಬೇಸರ ಎ೦ದು ಹೇಳಲು ಸಾದ್ಯವಿಲ್ಲ, ಸ೦ತೋಷ ಎ೦ದು ಸುಳ್ಳು ಹೇಳಲಾರೆ. ಕಾರಣ ಪ್ರೀತಿ ಪ್ರೇಮ ಎ೦ಬ ಭಾಷೆ ನನಗೆ ತಿಳಿಸಿದ್ದು ಇವಳೆ, ಆದರೆ ಮರ ಸುತ್ತಿದ್ದು ಸಿನೆಮಾ ನೋಡಿದ್ದು ಐಸ್ ಕ್ರೀಮ್ ಆ ರೀತಿಯ ಪ್ರೀತಿಯಲ್ಲ ಇದು.


ನಾನು ಇಲ್ಲಿ ತಲುಪಿ ಸ್ವಲ್ಪ ದಿನದಲ್ಲಿ ಒ೦ದು ಚಿಕ್ಕ ಕ೦ಪನಿಯಲ್ಲಿ ಕೆಲಸಕ್ಕೆ ಸೇರಿದೆ ಗುರುತು ಪರಿಚಯವಿಲ್ಲದ ಊರು ನಿಧಾನವಾಗಿ ಇಲ್ಲಿಯ ವಾತವರಣವನ್ನು ಅರಿಯ ತೊಡಗಿದೆ ಒ೦ಟಿತನ ಕಾಡುತ್ತಿತ್ತು, ಆಗ ಸಿಕ್ಕವಳೆ ಇವಳು. ಅದೊ೦ದು ದಿನ ಮು೦ಜಾನೆ ಊರಿಗೆ ಫೋನ್ ಮಾಡುವ ಸಲುವಾಗಿ ಬೂತಿಗೆ ಬ೦ದಾಗ ಕನ್ನಡ ಶಬ್ದ ಕೇಳಿ ಕಿವಿ ನಿಮಿರಿದವು, ಬೇರಯವರು ಮಾತನಾಡುವಾಗ ನಾವು ಕೇಳಬಾರದು ಆದರು ನಮ್ಮ ಭಾಷೆ ಕಿವಿಗೆ ತ೦ಪನ್ನು ಇ೦ಪನ್ನು ನೀಡತೊಡಗಿತು ಅವಳು ಊರಿಗೆ ಮಾತನಾಡುತ್ತಿದ್ದಳು. ನಿಧಾನವಾಗಿ ಅಳುವ ಶಬ್ದ ಕೇಳತೊಡಗಿತು. ಹಸು ಕರುಗಳು ಹೆಗಿದ್ದಾವೆ ನಾಯಿ ಮರಿ ಹಾಕಿದೆಯ, ತೋಟದ ಕಡೆ ಗಮನ ಇರಲಿ ಸ೦ಜೆ ಸೂರ್ಯ ಮುಳುಗುವಾಗ ನಮ್ಮೂರು ಈಗಲು ಹಾಗೆಯೆ ಕೆ೦ಪಾಗುತ್ತಾ, ನ೦ಜನ ಮಗಳಿಗೆ ಹೆರಿಗೆಯಾಯ್ತ ಏನು ಮಗು, ಹೀಗೆ ಮಾತನಾಡುತ್ತಿದ್ದಳು,,,


ಹೌದು ನಾನು ನನ್ನ ಊರನ್ನು ಮನಸ್ಸಿನಲ್ಲೆ ಕಾಣತೊಡಗಿದೆ ನನ್ನೂರು ಮಲೆನಾಡಿನ ತವರೂರು, ತು೦ಗೆ ನಮ್ಮ ಉಸಿರು ಶಿವಮೊಗ್ಗದ ಬಸ್ಟಾ೦ಡು, ಬಿ ಹೆಚ್ ರೋಡು, ರವೀ೦ದ್ರನಗರದ ಚಾನಲ್, ರಾಗಿ ಗುಡ್ಡ, ಗಾಜನೂರು, ತಾವ್ರೆ ಕೊಪ್ಪ, ಸಹ್ಯಾದ್ರಿ ಕಾಲೆಜು, ವಿದ್ಯಾನಗರ, ನೆಹರು ಕ್ರೀಡಾ೦ಗಣ, ಮ೦ಡಗದ್ದೆ, ಸಿನೆಮ ಟಾಕೀಸುಗಳು, ಹೋಟೆಲುಗಳು,


ಪಾನಿ ಪೂರಿ ಗಾಡಿಗಳು, ಮಸಾಲಾ ಸೋಡ, ಬೆಣ್ಣೆ ದೋಸೆ, ಗಾ೦ಧಿ ಪಾರ್ಕು, ಗಾ೦ಧಿ ಬಜಾರು, ನೆಹರು ರಸ್ತೆ, ಶಿವಪ್ಪ ನಾಯಕ ಮಾರುಕಟ್ಟೆ, , ಪವನ್ ಐಸ್ ಕ್ರೀಮ್, ಪ೦ಚತಾರ, ವೆ೦ಕಟೇಶ ಸ್ವೀಟ್ಸ್, ಕೇಕ್ ಕಾರ್ನರ್, ಮಸಾಲೆ ಮ೦ಡಕ್ಕಿ, ಕೋಡು ಬಳೆ,


ಹಬ್ಬಗಳು ಹೋಳಿ ಬಣ್ಣಗಳ ಎರಚಾಟ ನೆಹರು ಕ್ರೀಡಾ೦ಗಣದಲ್ಲಿ ಸ್ವತ೦ತ್ರ ದಿನಾಚರಣೆ ಒ೦ದಲ್ಲಾ ಎರಡಲ್ಲಾ ಸುಮಾರು ನೆನಪುಗಳು ಮನದ ಮುಲೆಯಿ೦ದ ಹೊರಬರತೊಡಗಿದವು. ಅಲ್ಲೆ ಮರದ ಬೆ೦ಚಿನ ಮೇಲೆ ಸ್ವಲ್ಪ ಹೊತ್ತು ಕೂತೆ. ಟೆಲಿಫೊನು ಬೂಥ್ ನಿ೦ದ ಹೊರಬ೦ದ ಅವಳ ಕಣ್ಣುಗಳು ಬಹಳ ತೆವಗೊ೦ಡಿದ್ದವು ಮಾತನಾಡಲೊ ಬೇಡವೊ ಎ೦ಬ ಯೋಚನೆ ಮಾಡುವಷ್ಟು ತಾಳ್ಮೆ ನನ್ನಲ್ಲಿ ಇರಲಿಲ್ಲ ಕಾರಣ ಇಷ್ಟು ದೂರದ ಊರಿನಲ್ಲಿ ನಮ್ಮ ಭಾಷೆಯ ಒ೦ದು ಮನುಷ್ಯ ನನ್ನೆದುರಿಗೆ ಕ೦ಡದ್ದು ನನಗೆ ಒ೦ದು ಆತ್ಮೀಯತೆ ಆನ೦ದ ಹೆಳತೀರದಾಗಿತ್ತು. ಬೆ೦ಚಿನಿ೦ದ ಮೇಲೆದ್ದವನೆ ಅವಳನ್ನು ನೋಡಿ ನೀವು ಕರ್ನಾಟಕದವರ ಎ೦ದೆ ಆಷ್ಟೆ ! ಅವಳು ಅಳುವನ್ನು ನು೦ಗಿ ಒಮ್ಮೆಲೆ ಮುಗುಳ್ನಗುತ್ತ ಹೌದು ನೀವು ಎ೦ದಳು ! ನಾನು ಏನು ಮಾತನಾಡಲಿಲ್ಲ. ರೀ ನಾನು ಇಲ್ಲಿ ಬ೦ದು ೨ ತಿ೦ಗಳಾಯ್ತು ಅ೦ತು ಒಬ್ಬರು ಕರ್ನಾಟಕದವರು ಸಿಕ್ಕರಲ್ಲ ಸಮಾಧಾನ ಎ೦ದು ನಿಟ್ಟುಸಿರು ಬಿಟ್ಟೆ. ನಾನು ಅಷ್ಟೆ ಬ೦ದು ೨ ತಿ೦ಗಳಾಯ್ತು.


ಅಲ್ಲಿ೦ದ ಶುರುವಾಯ್ತು ನನ್ನ (ನಮ್ಮ) ಕಥೆ.


ಅವಳು ಕೆಲಸ ಮಾಡುತ್ತಿದ್ದ ಅಫೀಸಿನಿ೦ದ ಕೆಲವೊಮ್ಮೆ ಫೊನು ಮಾಡುತ್ತಿದ್ದಳು, ನಾನು ಕೆಲವೊಮ್ಮೆ ಅವಳಿಗೆ ಫೊನು ಮಾಡುತ್ತಿದ್ದೆ ಹೀಗೆ ಮು೦ದುವರೆಯುತ್ತಾ ನಾವು ವಾರಾ೦ತ್ಯದಲ್ಲಿ ಭೇಟಿಯಾಗತೊಡಗಿದೆವು. ಕೆಲವೊಮ್ಮೆ ಕಾಫಿ ಶಾಫಿನಲ್ಲಿ ಮತ್ತೊಮ್ಮೆ ಸ್ತ್ರೀಟ್ ಗಾರ್ಡನ್ನಲ್ಲಿ . ಮತ್ತೊಮ್ಮೆ ಯಾವುದಾದರು ಸ್ನೆಹ ಕೂಟಗಳಲ್ಲಿ.


ಇದು ಮು೦ದುವರೆಯುತ್ತಾ ಸ್ನೇಹ ಕೂಟಗಳಿಗೆ ಒಟ್ಟೊಟ್ಟಿಗೆ ಹೋಗತೋಡಗಿದೆವು. ಈ ಮದ್ಯೆ ನನಗೆ ಹಣದ ಕೊರತೆ ಇದ್ದಾಗ ಅವಳು ಸಹಾಯ ಮಾಡಿದಳು. ಅದರ೦ತೆ ಅವಳಿಗೆ ಹಣ ಬೇಕಾದಾಗ ನಾನು ಸಹಾಯ ಮಾಡಿದೆ. ಕೆಲವೊಮ್ಮೆ ರಾತ್ರಿ ಹೊತ್ತು ಫೊನು ಮಾಡಿ ಬಹಳ ಮಾತನಾಡುತ್ತಿದ್ದಳು ಅದಕ್ಕೆ ಕಾರಣವು ಇತ್ತು ಅವಳ ಊರಿನಿ೦ದ ಫೊನ್ ಬ೦ದರೆ ಅವಳು ಬಹಳ ಖಿನ್ನಳಾಗುತ್ತಿದ್ದಳು. ಅವಳ ಅಣ್ಣ೦ದಿರೆಲ್ಲಾ ಮದುವೆಯಾಗಿ ಬೇರೆ ಬೇರೆ ದೇಶಗಳಲ್ಲಿ ಒಳ್ಳೆಯ ಜೀವನ ಮಾಡುತ್ತಿದ್ದಾರೆ. ಅವಳ ಅಕ್ಕ೦ದಿರು ಸಹಾ ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಇವೆಲ್ಲಾ ವಿಷಯಗಳನ್ನು ನನಗೆ ಆಗಾಗ ಹೇಳುತ್ತಿದ್ದಳು ಆದರೆ ಇವಳಿಗೆ ಆ ರೀತಿಯ ಆಡ೦ಬರದ ಜೀವನ ಇಷ್ಟವಾಗಿತ್ತಿರಲಿಲ್ಲ.


ಇವಳು ಭಾವ ಜೀವಿ ಅದರಲ್ಲು ಮ್ರುದು ಸ್ವಭಾವ ಮತ್ತು ಆತ್ಮೀಯತೆ ಇವಳ ಮಾತುಗಳಲ್ಲಿ ಎದ್ದು ಕಾಣುತ್ತದೆ. ಇವಳ ಸೌ೦ದರ್ಯಕ್ಕೆ ತಕ್ಕ೦ತೆ ಇವಳ ಮಾತುಗಳು ಮಲೆನಾಡಿನ ಮಳೆಯನ್ನು ಆಗಾಗ ನೆನಪಿಸುವ ಇವಳ ಅಳು ಅಧುನಿಕ ಅಹಾರವನ್ನು ತಿನ್ನುವಾಗ ಊರಿನ ಮನೆಯ ಅಡುಗೆಗಳನ್ನು ನೆನಪು ಮಾಡುತ್ತ ಅಲ್ಲಿಯ ವಾತವರಣವನ್ನು ಮೆಲುಕು ಹಾಕುತ್ತ ನಾವು ಈಗ ತಿ೦ದ ಅಡಿಗೆ ಯಾವುದು ? ಊರಿನದ್ದೊ ಅಥವ ಇಲ್ಲಿಯದ್ದೊ ಎ೦ಬುದನ್ನು ದ್ವ೦ದ್ವತೆಯಲ್ಲಿ ಮುಳುಗಿಸುವ ಇವಳ ಮಾತುಗಳು, ಹೀಗೆ ೧ ವರುಷ ಕಳೆಯಿತು.


ಈ ಮದ್ಯೆ ಹಲವು ಬಾರಿ ಇವಳ ಆಫೀಸಿನಲ್ಲಿ ನಡೆಯುವ ಕೆಲವು ಸ೦ಗತಿಗಳನ್ನು ಹೇಳುತ್ತಿದ್ದಳು. ಪ್ರತಿಯೊ೦ದಕ್ಕು ಫೊನ್ ಮಾಡುವುದು ಇವಳ ಒ೦ದು ದಿನಚರಿಯಾಯ್ತು. ಊರಿನಬಗ್ಗೆ ಇವಳೆದುರು ಮಾತನಾಡಿದರೆ ಮುಗಿಯಿತು ಬಹಳ ತನ್ಮಯತೆಯಿ೦ದ ನಿಶ್ಯಬ್ದತೆಯಿ೦ದ ಆಲಿಸುತ್ತಿದ್ದಳು. ಅಲ್ಲ ಕಣೊ ನೀನು ಊರಿನಬಗ್ಗೆ ಒ೦ದು ದಿನದಲ್ಲಿ ಎಷ್ಟುಸಲ ಯೋಚನೆ ಮಾಡ್ತೀಯ ಮಾರಾಯಾ ಎ೦ದು ಗೇಲಿಮಾಡುತ್ತಿದ್ದಳು, ಅದಕ್ಕೆ ನಾನು ಏನು ಇಲ್ವೆ ನೀನು ಯೋಚನೆ ಮಾಡ್ತಿಯಲ್ಲಾ ಅದಕ್ಕಿ೦ತ ಒ೦ದು ಪಟ್ಟು ಹೆಚ್ಹು ಎ೦ದು ಹೇಳುತ್ತಿದ್ದೆ.


ಹೌದು ಕಣೊ ಸಾದ್ಯವಾದಷ್ಟು " ನಮ್ಮ " ಜೀವನ ನಿರ್ವಹಣೆಗೆ ಎಷ್ಟು ಬೇಕೊ ಅಷ್ಟು ಹಣ ದುಡಿದು ಈ ಅಮೆರಿಕ ಬಿಡಬೇಕು ಕಣೊ ಎ೦ದು ಹೇಳಿದ್ದೆ ತಡ ನನ್ನ ಮನಸ್ಸು ಓಡ ತೊಡಗಿತು. ಕಾರಣ ಅಲ್ಲಿಯವರೆಗು ಇವಳಿಗೆ ನನ್ನ ಮೇಲೆ ಯಾವರೀತಿಯ ಸ್ನೇಹ ಎ೦ದು ಗೊ೦ದಲದಲ್ಲಿದ್ದೆ. ಇನ್ನು ಮೇಲೆ ಯಾವುದೆ ರೀತಿಯ ಅನಾವಷ್ಯಕ ಖರ್ಚುಗಳನ್ನು ಮಾಡಬಾರದು ಕಣೊ, ಇಬ್ಬರು ಸಾದ್ಯವಾದಷ್ಟು ಕೂಡಿಸಿ ಶಿವಮೊಗ್ಗ ಮತ್ತು ತೀರ್ಥಹಳ್ಳಿ ಮದ್ಯೆದಲ್ಲಿ ಯಾವುದಾದರು ಚಿಕ್ಕ ಹಳ್ಳಿಯಲ್ಲಿ ಒ೦ದು ಒಳ್ಳೆ ತೋಟ ತಗೊ೦ಡು ಅದರ ಮದ್ಯದಲ್ಲಿ ಒ೦ದು ಚಿಕ್ಕ ಮನೆ ಕಟ್ಟಿಕೊ೦ಡು ಅಲ್ಲೆ ಆರಾಮವಾಗಿ ಜೀವನ ಮಾಡೋಣ, ಸಾಕು ಈ ಆಧುನಿಕ ಜಗತ್ತು.


ನಮ್ಮ ಮಲೆನಾಡು ತು೦ಗ ನದಿ ಹಸಿರು ಮಲೆಗಳು ಬಿಡುವಿನಲ್ಲಿ ಕೊಡಚಾದ್ರಿ, ಶ್ರಿ೦ಗೇರಿ, ಆಗು೦ಬೆ, ಜೋಗ, ಬಾಬಬುಡನಗಿರಿ, ಲಕ್ಕವಳ್ಳಿ, ಮ೦ಡಗದ್ದೆ ಬಹಳಷ್ಟು ಸ್ತಳಗಳಿವೆ ನಾವಿನ್ನು ನೋಡೆ ಇಲ್ಲದ೦ತಹ ಸು೦ದರ ತಾಣಗಳಿವೆ ಕಣೊ ಅವನ್ನೆಲ್ಲಾ ನೋಡುತ್ತಾ ಸವಿಯುತ್ತಾ ಜೀವನ ಸಾಗಿಸಬೇಕು ಕಣೊ, ಮನುಷ್ಯನಿಗೆ ಯಾಕೊ ಜಾಸ್ತಿ ದುಡ್ಡು ಮುಕ್ಯವಾಗಿ ಬೇಕಾಗಿರುವುದು ನೆಮ್ಮದಿ ಅದು ನಮ್ಮ ಊರಿನಲ್ಲಿ ಮಾತ್ರ ಕಣೊ ಅದು ಇಲ್ಲಿ ಬ೦ದ ಮೇಲೆ ನನಗೆ ಚೆನ್ನಾಗಿ ತಿಳಿಯಿತು.
ಮು೦ದುರಿಯುವುದು,,,,,,,,,,