Monday 19 October 2009

ಮಂಡಗದ್ದೆ ಪಕ್ಷಿ ಧಾಮ ಪಕ್ಷಿಗಳ (ಕಣ್ಣೀರ) ಕಲರವ

ಮಂಡಗದ್ದೆ ಪಕ್ಷಿ ಧಾಮ ವೆಂದರೆ ಎಲ್ಲರಿಗು ತಿಳಿದಿರುವ ವಿಷಯ. ಶಿವಮೊಗ್ಗದಿಂದ ಕೆಲವೇ ನಿಮಿಷಗಳ ಪ್ರಯಾಣದಲ್ಲಿ ಅಲ್ಲಿ ತಲುಪಬಹುದು, ಹೊಸಹಳ್ಳಿ ಗಾಜನೂರು ಮಂಡಗದ್ದೆ. ತುಂಗಾ ನದಿಯ ತೀರದಲ್ಲೇ ಚಲಿಸುವ ರಸ್ತೆ ಮಂಡಗದ್ದೆ ಪಕ್ಷಿಧಾಮಕೆ ತಲುಪುತ್ತದೆ ರಸ್ತೆಯ ಪಕ್ಕದಲ್ಲೇ ತುಂಗಾ ನದಿ ಅದರ ಒಂದು ಭಾಗದಲ್ಲಿ ಪಕ್ಷಿಗಳ ಕಲರವ ಅಲ್ಲೊಂದು ಪಕ್ಷಿ ವೀಕ್ಷಣ ಗೋಪುರ, ಈ ಗೋಪುರಕ್ಕೆ ಹತ್ತುವಾಗ ಬಹಳ ಜಾಗರೂಕತೆಯಿಂದ ಹತ್ತ ಬೇಕು.

ಈ ದಾರಿಯ ಮೂಲಕ ಮಂಗಳೂರು ಹೋಗುವಾಗಲೆಲ್ಲ ನಾನು ಬಹಳ ನೆನಪಿಸಿಕೊಳ್ಳುವ ಪಕ್ಷಿಧಾಮಕ್ಕೆ ಒಂದು ವಿಷೆಶತೆಯು ಇದೆ ಅದೆಂದರೆ ಮಂಜಣ್ಣನ ಮಗಳು ಲಕ್ಷ್ಮಿ . ಕಾರಣವಿಷ್ಟೇ ಅಂದು ನಾನು ಕಾಲೇಜಿನಲ್ಲಿದ್ದಾಗ ನಾವು ಸ್ನೇಹಿತರೆಲ್ಲ ಸೇರಿ ಬೈಕಿನಲ್ಲಿ ಪಕ್ಷಿ ಧಾಮ ನೋಡಲು ಹೋಗಿದ್ದೆವು. ಹೀಗೆ ಹೋದವರು ಗೋಪುರ ಹತ್ತಿ ಪಕ್ಷಿಗಳನ್ನು ನೋಡುತ್ತಾ ಒಬ್ಬಬ್ಬರದು ಒಂದೊಂದು ಅಭಿಪ್ರಾಯಗಳನ್ನು ತೋರ್ಪಡಿಸುತ್ತ ಇದ್ದಾಗ ಕೆಳಗೆ ಬಟ್ಟೆ ತೊಳೆಯಲು ಬಂದಿರುವ ಹುಡುಗಿಯರಲ್ಲಿ ಲಕ್ಷ್ಮಿಯು ಇದ್ದಳು ಆದರೆ ಅವಳು ನನ್ನನ್ನು ನೋಡಿರಲಿಲ್ಲ ಅಲ್ಲದೆ ನನ್ನ ಸ್ನೇಹಿತರಾರಿಗೂ ಪರಿಚಯವಿಲ್ಲ ಆದರೆ ಇವರ ಕುಟುಂಬ ಪೂರ್ತಿ ನಮ್ಮ ಮನೆಯವರಿಗೆ ಗೊತ್ತು ಇವಳಿಗೂ ಗೊತ್ತು. ಹೀಗಿರುವಾಗ ನಾನು ಸುಮ್ಮನೆ ಇದ್ದೆ ಕಾರಣ ಅಲ್ಲಿ ಏನಾದರು ತಲೆ ಹರಟೆ ನಡೆದರೆ ಅದು ನೇರ ನಮ್ಮ ಮನೆ ತಲುಪುತ್ತದೆ ಎಂಬುದು ಖಾತ್ರಿ, ನಾವು ತಂದಿದ್ದ ತಿಂಡಿ ಪೊಟ್ಟಣಗಳನ್ನು ಬಿಚ್ಚು ತಿದ್ದಂತೆಯೇ ಎಲ್ಲಿಂದಲೋ ಹಲವಾರು ಮಂಗಗಳು ಬಂದು ಸೇರತೊಡಗಿದವು ಅದನ್ನು ನೋಡಿ ನಾವೆಲ್ಲರೂ ಹೆದರಿ ಆಚೆ ಈಚೆ ಅದನ್ನು ಓಡಿಸ ತೊಡಗಿದೆವು.
ಇದನ್ನು ನೋಡಿ ಲಕ್ಷ್ಮಿ ತುಳುಬಾಷೆಯಲ್ಲಿ ಇಲ್ಲಿ ನೋಡೇ ಮಂಗಗಳನ್ನು ನೋಡಿ ಮಂಗಗಳು ಮಾಡ್ತಾ ಇರೋದು ಅಂದು ಬಿಟ್ಟಳು ಅಲ್ಲಿ ನಮ್ಮ ಸ್ನೇಹಿತರಾರಿಗೂ ತುಳು ಬರುವುದಿಲ್ಲ ಆದರೆ ನಂಗೆ ತುಳು ಗೊತ್ತು ಕೂಡಲೇ ನಾನು ಗೋಪುರದಿಂದ ಬಗ್ಗಿ ತುಳುವಿನಲ್ಲಿ ಏ ಲಕ್ಷ್ಮಿ ಛೆ ನೀನು ನಮಗೆ ಈ ರೀತಿ ಹೇಳಬಾರದಿತ್ತು ಅಂದು ಬಿಟ್ಟೆ ಅನಿರೀಕ್ಷಿತವಾಗಿ ನನ್ನನ್ನು ನೋಡಿದ ಲಕ್ಷ್ಮಿ ತೊಳೆಯುವ ಬಟ್ಟೆಯನ್ನು ಬಿಟ್ಟು ಮನೆಗೆ ಓಡಿದಳು .
ಮತ್ತೆ ಅವಳನ್ನು ನೋಡುವುದೇ ಅಪರೂಪ ವಾಯ್ತು ಕಾರಣ ವಿಷ್ಟೇ ಎಲ್ಲಿ ಸುದ್ದಿ ಅವರಪ್ಪನಿಗೆ ತಲುಪುತ್ತದೋ ಅಂತ ಅವಳಿಗೆ ಹೆದರಿಕೆ. ಇವೆಲ್ಲ ಒಂದು ಹುಡುಗಾಟಿಕೆ ತರ ಮುಗಿದು ಹೋಯ್ತು.
ಅಗಾಗ ಮಂಡಗದ್ದೆಗೆ ಹೋಗುವುದು ನೆಂಟರು ಬೇರೆ ಬೇರೆ ಊರಿಂದ ಬಂದಾಗ ಅವರನ್ನು ಕರೆದು ಕೊಂಡು ಹೋಗುವುದು ಹೀಗೆ ನಡೆದಿತ್ತು. ಅದೊಂದು ಅದ್ಬುತ ಲೋಕವಾಗಿತ್ತು ದೂರ ದೂರ ದೇಶದಿಂದ ಪಕ್ಷಿಗಳು ಅಲ್ಲಿಗೆ ಬರುತ್ತಿದ್ದವು ಹರಿಯುವ ನೀರು ಅದ್ರ ಮದ್ಯೆ ಮರಗಳು ಅಲ್ಲಿ ಪಕ್ಷಿಗಳ ಗೂಡು ಅದರ ಕಲರವ ,,,

ಅದೆಲ್ಲ ಈಗ ಒಂದು ನೆನಪು ಮಾತ್ರ ಕಾರಣ ಈಗ ಅಲ್ಲಿ ಹಿಂದಿನಂತೆ ಪಕ್ಷಿ ಗಳು ಇಲ್ಲ ಮೊನ್ನೆ ನಾನು ಅಲ್ಲಿ ಹೋದಾಗ ಕಂಡದ್ದು ಪಕ್ಷಿಗಳ ಕಣ್ಣೀರು . ಪ್ರಕೃತಿಯ ವಿಕೋಪದಿಂದ ಉಕ್ಕಿ ಹರಿದ ನೀರು ಪಕ್ಷಿಗಳ ಗೂಡುಗಳನ್ನೆಲ್ಲ ಕೊಚ್ಚಿಕೊಂಡು ಹೋಗಿದೆ, ಅಲ್ಲಿದ್ದ ಮರಗಳು ಹಿನ್ನೀರಿನ ಹೆಚ್ಚಳದಿಂದಾಗಿ ಮುಳುಗಿ ಹೋಗಿವೆ , ಅದಕ್ಕಿಂತ ಹೆಚ್ಚಾಗಿ ಮನುಷ್ಯ ಎಂಬ ರಾಕ್ಷಸ ಪಕ್ಷಿಗಳ ಬೇಟೆಯನ್ನು ಪ್ರಾರಂಬಿಸಿದ್ದಾನೆ ಅದರಿಂದಲೂ ಹೆದರಿ ಅವು ದೂರಾಗಿವೆ. ಸುಂದರ ಪಕ್ಷಿಧಾಮ ನೆನಪುಗಳ ಸರಣಿಯಲ್ಲಿ ಮರೆಯಾಗಿದೆ ನಾನು ಅದೇ ಸ್ಥಳದಲ್ಲಿ ಹಿಂದೆ ತೆಗೆದ ಫೋಟೋಗಳು ಇಂದಿನ ಫೋಟೋಗಳಿಗೆ ಹೊಲಿಕೆಯಾಗುತ್ತಿಲ್ಲ. ತೊಂದರಯಿಲ್ಲ ಇಂದಲ್ಲ ನಾಳೆ ನನ್ನ ಮಂಡಗದ್ದೆ ಪಕ್ಷಿ ಧಾಮ ಮತ್ತೆ ಸುಂದರತೆಯನ್ನು ಪಡೆದು ಕೊಳ್ಳುತ್ತದೆ ಅದರ ನಿರೀಕ್ಷೆಯಲ್ಲಿ ಕಾಯುತ್ತ ಇದ್ದೇನೆ ,,,,,,
ಹೆಚ್ಚಿನ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ :-
http://picasaweb.google.com/IsmailMkShivamogga/MandagaddeShivamoga#

1 comment:

  1. ನಿಮ್ಮ ಲೇಖನ ತುಂಬಾ ಚೆನ್ನಾಗಿದೆ, ಪಕ್ಷಿಧಾಮ, ಗಿಡ ಮರ, ಕಾಡು ಎಲ್ಲವೊ ನಶಿಸುತ್ತಿದೆ... ಅವುಗಳ ಸಂರಕ್ಷಣೆ ಮಾಡಿದರೆ ಪ್ರಕೃತಿ ಸೌಂದರ್ಯ ಉಳಿಯುತ್ತದೆ.

    ReplyDelete