Monday 19 October 2009

"ನಗರ ಕೋಟೆ" ಜೀವನದಲ್ಲಿ ಒಮ್ಮೆಯಾದರು ನೋಡಿರಿ


ಅಂದು ನಾನು ಡಿಗ್ರಿಯಲ್ಲಿದ್ದಾಗ ಬೇಕಲ ಕೋಟೆ ನೋಡಲು ಹೋಗಿದ್ದೆ, ಆಗ ಅಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ ಅದೊಂದು ನಿರ್ಜನ ಪ್ರದೇಶವಾಗಿತ್ತು ಗಿಡ ಗಂತಿಗಳೆಲ್ಲ ಬೆಳೆದು ಅದೊಂದು ಬೇರೆಯೇ ವಾತವರಣ ಇತ್ತು. ಕಳೆದ ಡಿಸೆಂಬರಿನಲ್ಲಿ ಅಲ್ಲಿ ಹೋದಾಗ ಅದೊಂದು ಹೊಸ ಬೇಕಲ ಕೋಟೆ ಅದರ ಸುಂದರತೆಗೆ ಬದಲಿಲ್ಲ ಹಾಗೆ ಬದಲಾಗಿದೆ. ಈಗಲ್ಲಿ ಪ್ರವೇಶ ಶುಲ್ಕ ಕೊಡಬೇಕು ಸ್ಟಿಲ್ ಕ್ಯಾಮರಕ್ಕೆ ಶುಲ್ಕ, ವೀಡಿಯೋ ಕ್ಯಾಮ್ ಗೆ ಬೇರೆ ಶುಲ್ಕ, ಶೌಚಾಲಯ ವೆವಸ್ತೆ ಮಾಡಿದ್ದಾರೆ ಎಲ್ಲವು ಅಚ್ಚುಕಟ್ಟಾಗಿದೆ. ದಿನವು ಸಾವಿರಾರು ಜನರು ನೋಡಲು ಬರುತ್ತಾರೆ ಬಳಷ್ಟು ಸಿನಿಮಾ ಶೂಟಿಂಗಳು ಅಲ್ಲಿ ನಡೆಯುತ್ತವೆ. ಅಂದರೆ ಪ್ರವಾಸೋದ್ಯಮ ಎಚ್ಚತ್ತು ಕೊಂಡಿದೆ ಅದರ ವರಮಾನವು ಪಕ್ಕದ ಕೇರಳ ರಾಜ್ಯಕ್ಕೆ ಬಹಳಷ್ಟು ಬರುತ್ತಿದೆ.

ಇದೆಲ್ಲ ಹೇಳಲು ಕಾರಣ ನಾನು ಈ ಕಾಂಕ್ರೀಟ್ ಕಾಡಿನಲ್ಲಿದ್ದರು ಗೂಗಲ್ ನಲ್ಲಿ ಅಗಾಗ ನಮ್ಮ ಭಾರತವನ್ನು ಅದರಲ್ಲೂ ನಮ್ಮ ಕರ್ನಾಟಕವನ್ನು ಆದಷ್ಟು ಕೂಲಂಕಷ ವಾಗಿ ನೋಡಲು ಪ್ರಯತ್ನಿಸುತ್ತಿರುತ್ತೇನೆ. ಅದರಲ್ಲಿ ನನಗೆ ಅತಿಯಾಗಿ ಅಗಾಗ ಕಾಡುವ ಕೆಲವು ಸ್ಥಳಗಳೆಂದರೆ " ನಗರ ಕೋಟೆ " ಕವಲೇ ದುರ್ಗಾ " ಹಂಪಿ " ಜೋಗ " ಬಾಬಬುಡನಗಿರಿ " ಆಗುಂಬೆ " ಹುಲಿಕಲ್ಲು " ಶಿರಾಡಿ ಘಾಟ್ " ಕೊಡಚಾದ್ರಿ " ಯಾಣ " ಚಿತ್ರ ದುರ್ಗ " ಮಡಿಕೇರಿ " ಕುದುರೆಮುಖ " ಇನ್ನು ಹಲವಾರು ನಾನು ಇಷ್ಟ ಪಡುವಂತ
ಅದರಲ್ಲಿ ಈ ಬಾರಿ ನೋಡಲೇಬೇಕು ಎಂದು ತೀರ್ಮಾನಿಸಿದ್ದ ಕೆಲವು ಸ್ಥಳಗಳನ್ನು ನೋಡಿ ಸಂತೋಷವು ಬೇಸರವು ಆಯ್ತು ಕಾರಣ ಹಲವಾರು. ನಗರ ಕೋಟೆ ನೋಡಲು ತೀರ್ಮಾನಿಸಿ ಹೊರಟ ನಾವು ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗವಾಗಿ ಹೊರಟು ಅರಗ' ಅರಳಿ ಸುರಳಿ ' ಹಿಲ್ಕುಂಜಿ 'ಕವಲೇದುರ್ಗ' ನಗರ ' ಹೊಸನಗರ ಸೂಫಿ ಶ್ರೈನ್ ಎಲ್ಲ ನೋಡುತ್ತಾ ನಗರ ಕೋಟೆ ತಲುಪಿದೆ ಜೊತೆಯಲ್ಲಿ ಮನೆಯವರೆಲ್ಲರೂ ಇದ್ದರು. ಬೆಳಗಿನಿಂದಲೇ ಚಿಟಿ ಪಿಟಿ ಮಳೆಯಲ್ಲಿ ತಂಪು ಗಾಳಿಯಲ್ಲಿ ಒಮ್ಮೆ ನದಿ ಕಂಡರೆ ಮತ್ತೊಮ್ಮೆ ಕಾಡು ಮತ್ತೊಮ್ಮೆ ಕಾನನ ಮತ್ತೊಮ್ಮೆ ಪ್ರಾಣಿಗಳು ಮತ್ತೊಮ್ಮೆ ಪಕ್ಷಿಗಳ ಕಲರವ ಇವೆಲ್ಲವುಗಳ ಮದ್ಯೆ ನಮ್ಮ ವಾಹನ ನಿಧಾನವಾಗಿ ಸಾಗುತಿತ್ತು. ಮಳೆಯಲ್ಲಿ ನೆಂದು ಬರುವ ಮಣ್ಣಿನ ಸುವಾಸನೆ ಚಿರ್ ಚಿರ್ ಎಂದು ವಾಹನದ ಟೈರಿಗೆ ಹಾರಿದ ನೀರಿನ ಶಬ್ದ , ಕೆಲೊಮ್ಮೆ ಕಾಡಿನ ಮದ್ಯೆ ಹೋಗುವಾಗ ಮರಗಳ ಮೇಲಿನಿಂದ ಬೀಳುವ ದಪ್ಪ ದಪ್ಪ ಮಳೆನೀರಿನ ಹನಿಗಳ ಶಬ್ದ, ಕೆಲೊಮ್ಮೆ ದಾರಿಯಲ್ಲಿ ಸೌದೆಯನ್ನು ಹೊತ್ತು ತಲೆಯ ಮೇಲಿಟ್ಟು ತಮ್ಮದೇ ಆದ ಭಂಗಿಯಲ್ಲಿ ಮಳೆಯನ್ನು ಗಾಳಿಯನ್ನು ಲೆಕ್ಕಿಸದೆ ನಡೆದು ಹೋಗುತ್ತಿರುವ ಹೆಂಗಸರು ಹುಡ್ಗಿಯರ ಸಾಲು, ಗೋಪ್ಪೆ ಹೊದ್ದು ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಜನರು ಛತ್ರಿd ಜನರು ಬಸ್ಸಿಗಾಗಿ ಕಾಯುತ್ತಿರುವ janaru ದೂರ ದೂರದಲ್ಲಿ ಮನೆಗಳು ಹೀಗೆ ನೋಡುತ್ತಾ ನೋಡುತ್ತಾ ದಾರಿ ಸವೆದದ್ದು ತಿಳಿಯಲಿಲ್ಲ ಅದೋ ಬಂತು ನಗರ ಕೋಟೆ.

ವಾಹನದಿಂದ ಇಳಿದು ಕೋಟೆಯ ಮಹಾ ದ್ವಾರದಿಂದ ಒಳಬಂದೆವು ಅಲ್ಲಿಗೆ ತಲುಪುವಾಗಲೇ ಸುತ್ತಲು ನೀರು ಇರುವುದನ್ನು ಸೂಫಿ ಶ್ರೈನ್ ನಿಂದ ನೋಡಿ ತಿಳಿಯಬಹುದಾಗಿತ್ತು. ಮನುಷ್ಯ ತನ್ನ ಜೀವನದಲ್ಲಿ ಒಮ್ಮೆಯಾದರು ಅದನ್ನು ನೋಡಲೇಬೇಕು. ಮಂಜು ಮುಸುಕಿದ ವಾತವರಣ ಜಿನಿ ಜಿನಿ ಮಳೆ ಸುತ್ತಲು ನೀರು ಅಲ್ಲೊಂದು ಇಲ್ಲೊಂದು ಸೇತುವೆ, ದೂರ ದೂರದಲ್ಲಿ ಅಲ್ಲೊಂದು ಇಲ್ಲೊಂದು ಮನೆ, ಹಸಿರಿನ ರಾಶಿ ಹೌದು ನನ್ನೂರಿಂದ ಕೆಲವೇ ಗಂಟೆಗಳ ಅವಧಿಯಲ್ಲಿ ತಲುಪುವ ಈ ಸೌನ್ದರ್ಯ ರಾಶಿಯನ್ನು ನಾನು ನೋಡಿರಲಿಲ್ಲ ಅಂದ ಮಾತ್ರಕ್ಕೆ ಇದನ್ನು ನಾನು ಬೇರೆ ಕೊಟೆಗಳೊಂದಿಗೆ ಹೋಲಿಸುತ್ತಿಲ್ಲ ಆದರು ಹಸಿರಿನ ಮದ್ಯೆ ಇಂದೊಂದು ಹಸಿರು ರಾಶಿಯಾಗಿ ಕಂಡಿತು ಇದನ್ನು ನೋಡಲು ಸೂಕ್ತ ಸಮಯ ವೆಂದರೆ ಆಗಸ್ಟ್ ಸೆಪ್ಟೆಂಬರ್ ಒಕ್ಟೋಬರ್ ನವಂಬರ್ ಡಿಸೆಂಬರ್ ಇವು ಒಳ್ಳೆಯ ಸಮಯ ಕಾರಣ ಮಳೆಯಲ್ಲಿ ಎಲ್ಲವು ಹಸಿರಾಗಿ ನದಿಗಳು ತುಂಬಿ ಸುತ್ತಲ ನೀರಿನ ಮದ್ಯೆ ಈ ಕೋಟೆ ಕಾಣುತ್ತದೆ.
ಇಷ್ಟೆಲ್ಲಾ ಆದರು ಬೇಸರದ ವಿಷಯವೆಂದರೆ ಅಲ್ಲಿ ಯಾವುದೇ ವೆವಸ್ತೆ ಇಲ್ಲ ಅಂದರೆ ದೂರದಿಂದ ಬರುವ ಪ್ರಾವಾಸಿಗರಿಗಾಗಿ ಬೇಕಾಗಿರುವುದು ಒಂದು ಶೌಚಾಲಯ ಮತ್ತು ಕುಡಿಯುವ ನೀರಿನ ವೆವಸ್ತೆ ಅಷ್ಟೆ ಮುಖ್ಯ ವಾಗಿ ಅದೇ ಇಲ್ಲ. ಅದಾದ ನಂತರ ಒಳ ಹೋದರೆ ಅಲ್ಲಿ ಕಾಣುವುದು ದನ ಎಮ್ಮೆ ಗಳು ಮೆಯುತ್ತಿರುವುದು ಎಲ್ಲವು ಅಲ್ಲೋಲ ಕಲ್ಲೋಲ ನೀರಿಲ್ಲದ ಹೊಂಡಗಳು ಹಾಳಾಗಿ ಬೀಳಾಗಿ ಹೋದ ವೆವಸ್ತೆ ಪಾಚಿಗಟ್ಟಿರುವ ದರ್ಬಾರ್ ಸ್ತಳ ಇವೆಲ್ಲವನ್ನೂ ಸರಿ ಮಾಡಿ ದುರಸ್ತಿ ಗೊಳಿಸಿ ಚಿಕ್ಕ ಒಂದು ಪ್ರವೇಶ ಶುಲ್ಕವನ್ನು ಇತ್ತು ಅದರಿಂದಲೇ ಬರುವ ವರಮಾನವನ್ನು ಎಲ್ಲ ಅಬಿರುದ್ದಿ ಕಾರ್ಯಗಳಿಗೆ ಬಳಸಬಹುದಲ್ಲ , ಅದೇ ರೀತಿ ಮುಂದುವರೆದು ಬೇಕಲ ಹೋಗುವ ನಮ್ಮ ಕನ್ನಡ ಸಿನಿಮಾ ತಯಾರಕರು ತಮ್ಮ ಸಿನಿಮಾಗಳನ್ನು ಇಲ್ಲಿಯೇ ಚಿತ್ರಿಸಬಹುದಲ್ಲ , ಹೀಗೆ ಅಲ್ಲವೇ ಅಭಿರುದ್ದಿ ಪ್ರಾರಂಭ ಗೊಳ್ಳುವುದು .
ನಾನು ಅಂದು ನೋಡಿದ ಬೇಕಲ ಕೋಟೆ ಹೀಗೆಯೇ ಇತ್ತು ಆದರೆ ಇಂದು ಎಲ್ಲ ಸಿನೆಮದವ್ರಿಗೂ ಗೊತ್ತು ಬೇಕಲ. ಹ್ಹಾಗೆಯೇ ಮುಂದೊಂದು ದಿನ " ನಗರ ಕೋಟೆಯೂ ಎಲ್ಲರಿಗು ತಿಳಿಯುವಂತಾಗಲಿ" ಎಲ್ಲರು ನೋಡಿ ಸಂತೋಷ ಪಡುವಂತಾಗಲಿ ಎಂದು ನಿರೀಕ್ಷೆಯಲಿ ,,,,,,,,,, ನಿಮ್ಮ ಸ್ನೇಹಿತ
ಹೆಚ್ಚಿನ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ :-

1 comment:

  1. ನಗರ ಕೋಟೆ ನಿಜವಾಗಿಯು ಬಹಳ ಚೆನ್ನಾಗಿದೆ. ಹೀಗೆಯೇ ಬರೆಯುತ್ತಿರಿ.

    ReplyDelete